You are currently browsing the category archive for the ‘ತರಾವರಿ’ category.

ನಮ್ಮ ಬ್ಲಾಗ್ ಗೆ ಸಿಕ್ಕ ಮೊದಲ ಪ್ರತಿಕ್ರಿಯೆಯೇ ಗೆಜ್ಜೆ ಕಟ್ಟಿಸಿದೆ. ನವಿಲು ಕುಣಿಯಲು ಕರೆಯುತ್ತಿದೆ. ನಾವಿನ್ನು ಕುಣಿಯಬೇಕಷ್ಟೇ. ಶ್ರೀದೇವಿ ಕಳಸದ ನಮ್ಮ ಕೂಗಿ ಕರೆಯುತ್ತಿರುವ ನವಿಲಿಗೆ ಸಂವಾದಿಸಿರುವುದು ಕವನದ ರೂಪದಲ್ಲಿ. ನಮ್ಮಲ್ಲೂ ಉತ್ಸಾಹ ಮೂಡಿಸಿದ ಮೊದಲ “ಘಮಘಮ” ದ ತರಂಗವಾದ್ದರಿಂದ ಇಲ್ಲಿ ಕೊಡುತ್ತಿದ್ದೇವೆ.

ಈ ಮಧ್ಯೆ ಈ ನವಿಲ ಕೂಗಿಸಿದವರು ಸುಗಂಧ.

ನಸುಗೆಂಪು ನಗೆಚೆಲ್ಲಿ
ನೆಲ-ಮುಗಿಲು ನಸುನಾಚಿ
ಕಡು ನೀಲಿ ಕೊರಳು, ಗಿಳಿಹಸಿರ ಕುಸುರಿ,
ನೆಲ ಕೆದರಿ ಗರಿ ಗೆದರಿ
ಗಿರ ಗಿರನೆ ತಿರು-ತಿರುಗಿ
ಮೈ ತುಂಬಾ ಕನಸ ಕಣ್ಣ,
ಮರಳುವನೆ ಮಾಧವ
ನುಡಿಸುವನೆ ಮುರಳಿಯ…

ಪ್ರತಿಕ್ರಿಯೆ ನೀಡಿದ ಶ್ರೀದೇವಿಗೂ ಧನ್ಯವಾದ. ಪ್ರೀತಿ ಮತ್ತು ಬ್ಲಾಗ್ ಗೆ ಭೇಟಿ ನೀಡುತ್ತಿರಿ.

ಗಂಧಸುಗಂಧ

ದಿನದರ್ಶಿ

ಜೂನ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1234
567891011
12131415161718
19202122232425
2627282930  

ಅನುಭವಿಸಿದವರು

  • 2,615 ಅನುಭಾವಿಗಳು