ನಮ್ಮ ಬ್ಲಾಗ್ ಗೆ ಸಿಕ್ಕ ಮೊದಲ ಪ್ರತಿಕ್ರಿಯೆಯೇ ಗೆಜ್ಜೆ ಕಟ್ಟಿಸಿದೆ. ನವಿಲು ಕುಣಿಯಲು ಕರೆಯುತ್ತಿದೆ. ನಾವಿನ್ನು ಕುಣಿಯಬೇಕಷ್ಟೇ. ಶ್ರೀದೇವಿ ಕಳಸದ ನಮ್ಮ ಕೂಗಿ ಕರೆಯುತ್ತಿರುವ ನವಿಲಿಗೆ ಸಂವಾದಿಸಿರುವುದು ಕವನದ ರೂಪದಲ್ಲಿ. ನಮ್ಮಲ್ಲೂ ಉತ್ಸಾಹ ಮೂಡಿಸಿದ ಮೊದಲ “ಘಮಘಮ” ದ ತರಂಗವಾದ್ದರಿಂದ ಇಲ್ಲಿ ಕೊಡುತ್ತಿದ್ದೇವೆ.

ಈ ಮಧ್ಯೆ ಈ ನವಿಲ ಕೂಗಿಸಿದವರು ಸುಗಂಧ.

ನಸುಗೆಂಪು ನಗೆಚೆಲ್ಲಿ
ನೆಲ-ಮುಗಿಲು ನಸುನಾಚಿ
ಕಡು ನೀಲಿ ಕೊರಳು, ಗಿಳಿಹಸಿರ ಕುಸುರಿ,
ನೆಲ ಕೆದರಿ ಗರಿ ಗೆದರಿ
ಗಿರ ಗಿರನೆ ತಿರು-ತಿರುಗಿ
ಮೈ ತುಂಬಾ ಕನಸ ಕಣ್ಣ,
ಮರಳುವನೆ ಮಾಧವ
ನುಡಿಸುವನೆ ಮುರಳಿಯ…

ಪ್ರತಿಕ್ರಿಯೆ ನೀಡಿದ ಶ್ರೀದೇವಿಗೂ ಧನ್ಯವಾದ. ಪ್ರೀತಿ ಮತ್ತು ಬ್ಲಾಗ್ ಗೆ ಭೇಟಿ ನೀಡುತ್ತಿರಿ.

ಗಂಧಸುಗಂಧ